ಮಂಗಳವಾರ, ಫೆಬ್ರವರಿ 23, 2016

ಕೋಮು ಸೌಹಾರ್ದ..

ಯುದ್ಧ ಬರುತಿದೆ, ಯುದ್ಧ ಬರುತಿದೆ
ರಕ್ತ-ಧೋಮಳೆ ಕಾದಿದೆ!
ಎದ್ದು ಹೋರಾಡುವ ಸೌಹಾರ್ದತೆಯಲಿ ನಾವೇ,
ಗದ್ದುಗೆಯಲಿ ಹೊದ್ದು ಮಲಗಿಹರಿಗೆ ಕಾಯದೇ!
ಎಲ್ಲೋ ಗಡಿಯಿಂದ ನುಸುಳಿ ಬರದು;
ನಮ್ಮ ನಡುವಲೆ ಎದೆಯ ಸೀಳುತ,
ಒಡಲ ಬಗೆಯುತ ಸಿಡಿವುದು!
ಮತದ ಮತ್ಸರ ಸುಡುತ ಹರಡಲು
ಬಹಳ ಸಮಯವು ಹಿಡಿಯದು!
ಒಡೆದ ಮನೆಯೇ ಕಿಡಿಯ ಆಗರ,
ಕಡೆಗೆ ನಾಶವು ಖಂಡಿತ!
ನಮ್ಮ ದ್ವೇಷವೆ ಅವರ ಆಯುಧ,
ನಮ್ಮ ದೋಸ್ತಿಯೆ ಅವರ ಅಂತ್ಯ!
ಗೆಲುವ ಸ್ನೇಹದಿ ಸೇರುತ.
ನಮ್ಮ ಹಬ್ಬಕೆ ನೀವೇ ನೆಂಟರು,
ನಿಮ್ಮ ಗುಡಿಗೆ ನಾವೇ ಭಂಟರು,
"ಶಾಂತಿಯುಗ"ವ ಕಟ್ಟುವ;
ವಿಷವ ಬಿತ್ತುವ ನೀಚ ನರಿಗಳ
ಅರಿತು ದೂರಕೆ ಅಟ್ಟುವ!
('ಕರಾವಳಿ ಕರ್ನಾಟಕ'ದ ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಕವನ)

ಬುಧವಾರ, ಫೆಬ್ರವರಿ 3, 2016

ಎಂದು ಎಚ್ಚರ?

ಎಂದಿಗೆ ಎಚ್ಚರ ನಿನಗೆ?
ಎಂದಿಗೆ ಅರಿವಿನ ಬೆಳಗು?
ಶತಮಾನ ಕಳೆಯುತಿದೆ
ಮುಗಿದಿಲ್ಲ ಅನ್ಯಾಯದ ಇರುಳು!

ದೇಶಕೆ ಹನಿಸಿದ ಬೆವರೆಷ್ಟು?
ಏಳಿಗೆಯೆಡೆಗಿನ ನಡೆಯೆಷ್ಟು?
ಧರ್ಮಕೆ ಹರಿಸಿದ ನೆತ್ತರೆಷ್ಟು?
ಹರಿಸಿ ಪಡೆದ ಫಲವದೆಷ್ಟು?
ಲೆಕ್ಕ, ತರ್ಕ ಮರೆತ ಮಂದಮತಿಯೇ
ಎಂದಿಗೆ ಎಚ್ಚರ ನಿನಗೆ?

ದಕ್ಷನೊಬ್ಬನ ಸಾವು
ಮರೆತು ಹೋಯಿತು ಮೂರೇ ದಿನಕೆ
ಮಣ್ಣಲಿ ಕರಗಿಹೋದ ಅವನ ದೇಹದಂತೆಯೇ;
ನೊಂದ ಮಾನಿನಿಯ ಕೂಗು
ಮಾಸಿಹೋಯಿತು ನಡು-
-ರಸ್ತೆಯಲಿ ಚೆಲ್ಲಿದ ಅವಳ ರಕ್ತದಂತೆಯೇ!
ಮೈಮರೆತು ಮಲಗಿಹ ಜಡ ಮತಿಯೇ
ಎಂದಿಗೆ ಎಚ್ಚರ ನಿನಗೆ?

ನಕಲಿ ಕಡತಗಳನ್ನು ಪುಟಪುಟದಲ್ಲೂ
ಮೋಸದ ಲೇಖನಿಯಲಿ ಕಥೆಯಾದ,
ಅರ್ಹತೆ, ವಿದ್ಯೆ ಕೌಶಲ್ಯಗಳಿದ್ದೂ
"ಪ್ರಭಾವ"ದ ಕಣ್ಣೆದುರಲಿ ಕಸವಾದ
ದಿವಾನ, ಜವಾನ, ರಕ್ಷಕ, ನಾಯಕರಿಗೆ
ತೆತ್ತು ಸೊರಗಿಹ 'ಮಧ್ಯಮ' ಮತಿಯೇ
ಎಂದಿಗೆ ಎಚ್ಚರ ನಿನಗೆ?

('ರಂಗೋತ್ರಿ'  ಸಂಸ್ಥೆಯವರು ಆಯೋಜಿಸಿದ್ದ 'ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ'ದಲ್ಲಿ ನಾನು ವಾಚಿಸಿದ ಕವನ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...