ಬುಧವಾರ, ಫೆಬ್ರವರಿ 3, 2016

ಎಂದು ಎಚ್ಚರ?

ಎಂದಿಗೆ ಎಚ್ಚರ ನಿನಗೆ?
ಎಂದಿಗೆ ಅರಿವಿನ ಬೆಳಗು?
ಶತಮಾನ ಕಳೆಯುತಿದೆ
ಮುಗಿದಿಲ್ಲ ಅನ್ಯಾಯದ ಇರುಳು!

ದೇಶಕೆ ಹನಿಸಿದ ಬೆವರೆಷ್ಟು?
ಏಳಿಗೆಯೆಡೆಗಿನ ನಡೆಯೆಷ್ಟು?
ಧರ್ಮಕೆ ಹರಿಸಿದ ನೆತ್ತರೆಷ್ಟು?
ಹರಿಸಿ ಪಡೆದ ಫಲವದೆಷ್ಟು?
ಲೆಕ್ಕ, ತರ್ಕ ಮರೆತ ಮಂದಮತಿಯೇ
ಎಂದಿಗೆ ಎಚ್ಚರ ನಿನಗೆ?

ದಕ್ಷನೊಬ್ಬನ ಸಾವು
ಮರೆತು ಹೋಯಿತು ಮೂರೇ ದಿನಕೆ
ಮಣ್ಣಲಿ ಕರಗಿಹೋದ ಅವನ ದೇಹದಂತೆಯೇ;
ನೊಂದ ಮಾನಿನಿಯ ಕೂಗು
ಮಾಸಿಹೋಯಿತು ನಡು-
-ರಸ್ತೆಯಲಿ ಚೆಲ್ಲಿದ ಅವಳ ರಕ್ತದಂತೆಯೇ!
ಮೈಮರೆತು ಮಲಗಿಹ ಜಡ ಮತಿಯೇ
ಎಂದಿಗೆ ಎಚ್ಚರ ನಿನಗೆ?

ನಕಲಿ ಕಡತಗಳನ್ನು ಪುಟಪುಟದಲ್ಲೂ
ಮೋಸದ ಲೇಖನಿಯಲಿ ಕಥೆಯಾದ,
ಅರ್ಹತೆ, ವಿದ್ಯೆ ಕೌಶಲ್ಯಗಳಿದ್ದೂ
"ಪ್ರಭಾವ"ದ ಕಣ್ಣೆದುರಲಿ ಕಸವಾದ
ದಿವಾನ, ಜವಾನ, ರಕ್ಷಕ, ನಾಯಕರಿಗೆ
ತೆತ್ತು ಸೊರಗಿಹ 'ಮಧ್ಯಮ' ಮತಿಯೇ
ಎಂದಿಗೆ ಎಚ್ಚರ ನಿನಗೆ?

('ರಂಗೋತ್ರಿ'  ಸಂಸ್ಥೆಯವರು ಆಯೋಜಿಸಿದ್ದ 'ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ'ದಲ್ಲಿ ನಾನು ವಾಚಿಸಿದ ಕವನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...