ಮಂಗಳವಾರ, ಫೆಬ್ರವರಿ 23, 2016

ಕೋಮು ಸೌಹಾರ್ದ..

ಯುದ್ಧ ಬರುತಿದೆ, ಯುದ್ಧ ಬರುತಿದೆ
ರಕ್ತ-ಧೋಮಳೆ ಕಾದಿದೆ!
ಎದ್ದು ಹೋರಾಡುವ ಸೌಹಾರ್ದತೆಯಲಿ ನಾವೇ,
ಗದ್ದುಗೆಯಲಿ ಹೊದ್ದು ಮಲಗಿಹರಿಗೆ ಕಾಯದೇ!
ಎಲ್ಲೋ ಗಡಿಯಿಂದ ನುಸುಳಿ ಬರದು;
ನಮ್ಮ ನಡುವಲೆ ಎದೆಯ ಸೀಳುತ,
ಒಡಲ ಬಗೆಯುತ ಸಿಡಿವುದು!
ಮತದ ಮತ್ಸರ ಸುಡುತ ಹರಡಲು
ಬಹಳ ಸಮಯವು ಹಿಡಿಯದು!
ಒಡೆದ ಮನೆಯೇ ಕಿಡಿಯ ಆಗರ,
ಕಡೆಗೆ ನಾಶವು ಖಂಡಿತ!
ನಮ್ಮ ದ್ವೇಷವೆ ಅವರ ಆಯುಧ,
ನಮ್ಮ ದೋಸ್ತಿಯೆ ಅವರ ಅಂತ್ಯ!
ಗೆಲುವ ಸ್ನೇಹದಿ ಸೇರುತ.
ನಮ್ಮ ಹಬ್ಬಕೆ ನೀವೇ ನೆಂಟರು,
ನಿಮ್ಮ ಗುಡಿಗೆ ನಾವೇ ಭಂಟರು,
"ಶಾಂತಿಯುಗ"ವ ಕಟ್ಟುವ;
ವಿಷವ ಬಿತ್ತುವ ನೀಚ ನರಿಗಳ
ಅರಿತು ದೂರಕೆ ಅಟ್ಟುವ!
('ಕರಾವಳಿ ಕರ್ನಾಟಕ'ದ ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಕವನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...