ಭಾನುವಾರ, ಡಿಸೆಂಬರ್ 6, 2015

ಒಲುಮೆದೀಪ

ಮುಂಗುರುಳ ಸುರುಳಿಯಲಿ ಸುಳಿದಿರುವ ತಂಗಾಳಿ
ನನ್ನೆಡೆಗೆ ಬೀಸಿರಲು ಹಿತವಾಗಿದೆ;
ಹೂಗಳನೆ ನಾಚಿಸುವ ಈ ಕೇಷದಾ ಘಮಕೆ
ಭಾವಗಳ ಮೆರವಣಿಗೆ ಅತಿಯಾಗಿದೆ.

ಕೆನ್ನೆಯ ಗಗನದಲಿ ನಾಚಿಕೆಯ ಕೆಂಬಣ್ಣ
ತುಂಬುವ ಸೂರ್ಯನು ನಾನಾಗೊ ಹಂಬಲ;
ನೆನ್ನೆಗಳ ಪುಟಗಳಲಿ ನಾ ಅರಸಿ ಸೋತಿದ್ದ
ಒಲವಿನ ಆಸರೆಯು ನೀನೆಂದು ನಂಬಲ?

ಬಂದ ದಾರಿಯಲೆಲ್ಲ ಬರಿ ಒಂಟಿ ಹೆಜ್ಜೆಗಳೇ,
ಹೊಸದಾಗಿದೆ ಈ ಗೆಜ್ಜೆ ಕಾಲ್ಗಳ ಸಹಯಾನ;
ಲಜ್ಜೆ ತುಂಬಿದ ದನಿಯು ಮೆಲ್ಲ ಕರೆದಿರಲು,
ನನ್ನ ಹೆಸರಿಗೂ ಬಂತು ಎಂತಹ ಹೊಸತನ!

ದಿವ್ಯವಾಗಲಿದೆ ನವ್ಯ ನಾಳೆಯ ಪಯಣ
ಬೆಸೆದ ಕರಗಳೆ ಇದಕೆ ದಿಟ್ಟ ಸಾಕ್ಷಿ!
ಭವ್ಯ ಬಾಳಿನ ಕದವ ಜೊತೆಯಾಗಿ ತೆರೆಯೋಣ
ಅಡಿಯಿಡುವ ಹೊಸಿಲಲ್ಲಿ ಒಲುಮೆ ದೀಪವಿರಿಸಿ.

('ನಿಮ್ಮೆಲ್ಲರ ಮಾನಸ"ದಲ್ಲಿ ಪ್ರಕಟವಾದ ನನ್ನ ಕವನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...