ಶನಿವಾರ, ಜನವರಿ 19, 2019

ಬಾಹುಬಲಿಗೆ..


ಪಾದಕೆರಗುವುದು
ಅಷ್ಟು ಸುಲಭವಲ್ಲ;
ನಮಸ್ಕಾರಗಳೆಲ್ಲಾ
'ಸಾಷ್ಟಾಂಗ'ವಾಗುವುದಿಲ್ಲ.
ಎಲ್ಲ ಕಳಚಿಟ್ಟ ಮೇಲೂ
ಉಳಿಯುವ 'ನಾನು'
ಅಷ್ಟು ಸುಲಭಕ್ಕೆ ಬಾಗುವುದಿಲ್ಲ‌;
ನೀ ಬಿಚ್ಚಿಟ್ಟ ಆ
ಕಟ್ಟ ಕಡೆಯ ವಸ್ತ್ರವ ಸುತ್ತಿಕೊಳ್ಳುವುದ
ನಾನಿನ್ನೂ ಬಿಟ್ಟಿಲ್ಲ.
ಈ ಘಂಟೆ, ಘಮಲುಗಳು
ನಿನ್ನೆತ್ತರವ ತಲುಪುವುದಿಲ್ಲ;
ಈ ಮಸ್ತಕದ ಹೊರೆಯ
ನಿನ್ನ ಪಾದಕೊರಗಿಸದ ಹೊರತು
ನನಗೆ ನೀ ಕಾಣುವುದಿಲ್ಲ!
ಬಾಗಿರುವೆನು ನಾನೀಗ
ಏಳುವುದಕ್ಕಾಗಿ;
ಬಾನಿಗೇ ಬೆಳೆದು ನಿಂತ
ನಿನ್ನೀ ತಳಪಾಯದ
ವಿಸ್ತಾರವ ಅರಿಯುವುದಕ್ಕಾಗಿ..
(ವಿಜಯಕರ್ನಾಟಕದ ಜುಲೈ15,2019ರ ಲವಲvkಯಲ್ಲಿ ಪ್ರಕಟಿತ.)
-ವಿನಾಯಕ ಅರಳಸುರಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...