ಶನಿವಾರ, ಜನವರಿ 19, 2019

ಮೊಟ್ಟ ಮೊದಲ ಕಿರುಚಿತ್ರ..

"ಅನಾಥವಾಗಬೇಕಿರುವುದು ಅನಾಥಾಶ್ರಮ/ವೃದ್ಧಾಶ್ರಮಗಳೇ ಹೊರತು ಅಪ್ಪ-ಅಮ್ಮ ಅಲ್ಲ!"
ಗೆಳೆಯ Venu Hasrali ಅವರು ಈ ಥೀಮ್ ಅನ್ನು ಹೇಳಿದಾಗ ನಿಜಕ್ಕೂ ವಾಹ್ ಎನ್ನಿಸಿತು. ಏಕಕಾಲಕ್ಕೆ ಕಿರುತೆರೆ, ಹಿರಿತೆರೆ ಹಾಗೂ ಮೊಬೈಲ್ ತೆರೆ ಮೂರರ ಬಗ್ಗೆಯೂ ಯೋಚಿಸುವ ಹಾಗೂ ಮೂರರಲ್ಲೂ ಉಳಿಯುವಂತಹಾದ್ದೇನನ್ನೋ ಮಾಡಬೇಕೆಂದು ಶ್ರಮಪಡುತ್ತಿರುವ ಗೆಳೆಯ ವೇಣು ಹಸ್ರಾಳಿ ಅವರ ನಿರ್ದೇಶನದ ಮೊಟ್ಟ ಮೊದಲ ಕಿರುಚಿತ್ರ #ಆಶೀರ್ವಾದ ಇಂದು ಬಿಡುಗಡೆಯಾಗಿದೆ. ಹಲವಾರು ಚೌಕಟ್ಟುಗಳಾಚೆಗೂ ಅವರ, ನಮ್ಮ ನಿರೀಕ್ಷೆಯನ್ನು ಮೀರಿ ಸುಂದರವಾಗಿ ಮೂಡಿಬಂದಿದೆ. ನಾನು ಬರೆದ ನಾಲ್ಕು ಸಾಲುಗಳ ಸಾಹಿತ್ಯ ಸಹಾ ರಾಮಸೇನೆಯ ನಡುವಿನ ಅಳಿಲಿನಂತೆ ನಡುವೆ ಸೇರಿಕೊಂಡಿದೆ.
ಹೊಸತಂಡ... ಹಳೆಯದೇ ಪ್ರೀತಿಯನ್ನು ಹೊಸ ದೃಶ್ಯವಾಗಿಸುವ ಹೊಸ ಪ್ರಯತ್ನ... ಒಮ್ಮೆ ನೋಡಿ... ಅಭಿಪ್ರಾಯ ತಿಳಿಸಿ.. ಇಷ್ಟವಾದಲ್ಲಿ ಶೇರ್ ಮಾಡಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...